Monday, July 12, 2021

ರಚ್ಚೆ

ಮಗು ಮನಸ್ಸು ಚಂಡಿ ಹಿಡಿವುದೊಮ್ಮೊಮ್ಮೆ

ನೀ ಬೇಕೆಂದು, ನಿನ್ನಿರುವು ಬೇಕೆಂದು

ಬೊಗಸೆಯಲ್ಲಿಟ್ಟು ಮುಖವೊಮ್ಮೆ

ಅಳದಲ್ಲೆಲ್ಲೋ ಹುದುಗಿ ಕುಳಿತ

ನೋವನ್ನೊಮ್ಮೆ ಸವರಿ, ಹೊರಗೆಳೆದು

ಧುಮುಕಲು ಅನುವಾಗಿ ನಿಂತ

ಕಣ್ಣೆವೆಯಲ್ಲಿಯ ಹನಿಬಿಂದು ತೊಡೆದು

ಅಪ್ಪುಗೆಯ ಸಾಂತ್ವನ ನೀಡಲ್ಲೊಲ್ಲೆ ಏಕೆ !?

ಮಗು ಮನಸ್ಸು ಚಂಡಿ ಹಿಡಿವುದೊಮ್ಮೊಮ್ಮೆ

ಪುಸಲಾಯಿಸಿ ಮುದ್ದಿಸಲ್ಲೋಲ್ಲೆ ಏಕೆ !?

No comments: