Sunday, August 8, 2021

ಮೀರಾ ಮತ್ತೆ ಹುಟ್ಟಿದ್ದು ರಾಧೆಯಾಗಿ.

 ಮೀರಾ ಮತ್ತೆ ಹುಟ್ಟಿದ್ದು ರಾಧೆಯಾಗಿ. 


ಭಕ್ತಿ, ಭಾವಗಳು ಈಗ ಹರಿದಿದ್ದು ಪ್ರೀತಿಯಾಗಿ. ಕೃಷ್ಣನ ಒಲವೆಲ್ಲ ಅವಳಿಗೇ ಸೀಮಿತ, ಅಪರಿಮಿತ ಹಾಗೂ ನಿಷ್ಕಲ್ಮಷ ಪ್ರೀತಿಯ ಧಾರೆ ಎಂದಿಗೂ ಕೃಷ್ಣನಿಗೆ. ಕೃಷ್ಣನ ಕೊಳಲೀಗ ಅವನ ಕಂಠದಲ್ಲೇ ಕರಗಿ ಹೋಗಿದೆ, ಅವನ ಮಧುರ ಮುರಳಿಯ ಗಾನ ಮತ್ತೀಗ ಅದೇ ರಾಧೆಗೆ. ರಾಧಾಳ ಹಣೆಯ ಸಿಂಧೂರ ಕೃಷ್ಣ. ಮದುವೆಯ ಪವಿತ್ರ ಬಂಧನ ಹಿಂದಿನ ಜನ್ಮದಲ್ಲೆಲ್ಲೋ ನಡೆದದ್ದಿದೆ, ಕೊನೆಯ ಜನ್ಮವಿರಬಹುದು, ಯಾವ ಬಂಧನದ, ಸಪ್ತಪದಿಗಳ, ಪ್ರಮಾಣಗಳ ಗೋಜಿಲ್ಲ. ಮತ್ತೆ ಅಗಲುವ ಆತಂಕವಿಲ್ಲ. ಜನ್ಮ ಜನ್ಮಕ್ಕೂ ಜೊತೆಯಾದವನು ಕೃಷ್ಣ. ಬೆರಳುಗಳ ಬೆಸೆದು ನಡೆಯುವ ದಾರಿ ಮುಂದೆಲ್ಲ ಹಸಿರಂತೆ. ಕೃಷ್ಣನ ಜೀವದ ಗೆಳತಿ ರಾಧೆಯಾದರೆ, ಅವಳ ಬಾಳಿನ ನಂದಾದೀಪ ಕೃಷ್ಣ. ಅವನ ಒಲವಿನ ಕರೆಗೆ ಸದಾ ಓಗೊಡುವ ರಾಧಾ, ಒಡಲಲ್ಲಿ ಹೊತ್ತು ತರುವುದು ತುಂಬು ಪ್ರೀತಿಯಷ್ಟೇ. ಅರಮನೆಯ ವೈಭೋಗ, ತಂಬೂರಿಯ ನಾದ, ಯಮುನಾ ನದಿಯ ತಟ, ಗೋವುಗಳ ಗಂಟೆಯ ಸದ್ದು, ಗೋಪಿಕೆಯರ ಕಾಲ್ಗೆಜ್ಜೆಯ ನಾದ ಇಂದಿಗೂ ಜೀವಂತ, ರಾಧಾ - ಕೃಷ್ಣರ ಮನಸಲ್ಲಿ. ❤️